Shobha Shetty-ಕನ್ನಡದಲ್ಲಿ ಬಿಗ್ ಬಾಸ್ 11ನೇ ಸೀಸನ್ ಚಾಲನೆಯಲ್ಲಿದೆ.. ಕಿಚ್ಚ ಸುದೀಪ್ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಂತೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರೂ ಇದ್ದಾರೆ. ಅವರಲ್ಲಿ ಕಾರ್ತಿಕ ದೀಪಂ ಖ್ಯಾತಿಯ ಶೋಭಾ ಶೆಟ್ಟಿ ಕೂಡ ಒಬ್ಬರು.
ಕಿರುತೆರೆಯ ಮೂಲಕ ಖ್ಯಾತಿ ಪಡೆದ ಶೋಭಾ ಶೆಟ್ಟಿ ಬಿಗ್ ಬಾಸ್ ತೆಲುಗು 7 ರಲ್ಲಿ ಸ್ಪರ್ಧಿಯಾಗಿ ಅವಕಾಶ ಪಡೆದರು. ಆ ಕಾಲದ ಯಶಸ್ಸಿಗೆ ಶೋಭಾ ಕೂಡ ಕಾರಣರಾಗಿದ್ದರು. ಹೊಡೆದಾಟ, ಕಿರುಚಾಟ, ಕೂಗಾಟ ನೋಡಿ ಪ್ರೇಕ್ಷಕರು ಮೈಂಡ್ ಬ್ಲ್ಯಾಕ್ ಆದರು. ನಾಮನಿರ್ದೇಶನಕ್ಕೆ ಬಂದಾಗಲೆಲ್ಲ ‘ನನ್ನನ್ನು ಎಲಿಮಿನೇಟ್ ಮಾಡಿ ಮೇಷ್ಟ್ರು’ ಎಂದು ಶೋಭಾ ಶೆಟ್ಟಿ ಕಾಮೆಂಟ್ ಮಾಡಿದರೆ ಅವರ ಮನೋವಿಕಾರ ಅರ್ಥವಾಗುತ್ತದೆ. ಈ ಕ್ರಮದಲ್ಲಿ ಶೋಭಾ ಟಾಪ್ 5 ರೊಳಗೆ ಬರದೇ ಎಲಿಮಿನೇಟ್ ಆದರು. ಆದರೆ ತೆಲುಗಿನಲ್ಲಿ ಬಿಗ್ ಬಾಸ್ ವಿನ್ನರ್ ಆಗುವ ಕನಸು ನನಸಾಗದ ಕಾರಣ ಮಾತೃಭಾಷೆ ಕನ್ನಡ ಬಿಗ್ ಬಾಸ್ ಮನೆಗೆ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ನೀಡಲಾಯಿತು. ಆದರೆ ಒಳಬರುವವರೆಗೂ ಕನ್ನಡದ ಮನೆ ಶಾಂತವಾಗಿತ್ತು.. ಅವಳ ಆಗಮನದಿಂದ ಗಲಾಟೆ ಶುರುವಾಯಿತು. ಸ್ಪರ್ಧಿಗಳ ಜೊತೆ ಹೊಡೆದಾಟದಿಂದ ಅಲ್ಲಿನ ಜನರಿಗೂ ಬೇಸರವಾಯಿತು.

ಶೋಭಾ ಶೆಟ್ಟಿ ಅವರು ಕನ್ನಡ ‘ಬಿಗ್ ಬಾಸ್’ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶ ಪಡೆದುಕೊಂಡಿದಾರೆ. ಆದರೆ ಅವರಿಗೆ ‘ಬಿಗ್ ಬಾಸ್’ ಮನೆ ಹೊಸದೇನಲ್ಲ. ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ಈಗಾಗಲೇ ಅವರು ಸ್ಪರ್ಧಿಯಾಗಿದ್ದವರು. ಆದರೆ ಇದಿಗ ಕನ್ನಡದ ಬಿಗ್ ಬಾಸ್ಗೆ ಬಂದಿರುವ ಅವರಿಗೆ, ಅದ್ಯಾಕೋ ಈ ಶೋನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಬಿಗ್ ಬಾಸ್ ಶೋವನ್ನು ಕ್ವಿಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕನ್ನಡದ ಬಿಗ್ ಬಾಸ್ ಮನೆಗೆ ಶೋಭಾ ಶೆಟ್ಟಿ ಬಹಳ ಉತ್ಸಾಹದಿಂದ ಮನೆಗೆ ಕಾಲಿಟ್ಟರು. ಈಗಾಗಲೇ ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ ಆಟ ಆಡಿದ ಅನುಭವ ಶೋಭಾಗೆ ಇದ್ದಿದ್ದರಿಂದ ಅವರು ಕನ್ನಡ ಬಿಗ್ ಬಾಸ್ನಲ್ಲೂ ತಮ್ಮ ಹವಾ ತೋರಿಸುತ್ತಾರೆ ಎಂಬ ಅಭಿಪ್ರಾಯ ಜನರಲ್ಲಿತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಕಳೆದ ವಾರ ಫುಲ್ ಡಲ್ ಆಗಿದ್ದ ಶೋಭಾ ಶೆಟ್ಟಿ, ಇದೀಗ ಶೋನಿಂದ ಅರ್ಧಕ್ಕೆ ಹೊರಗೆ ಹೋಗಲು ನಿರ್ಧರಿಸಿದ್ದಾರೆ. ಇದನ್ನು ಕೇಳಿದ ಮನೆ ಮಂದಿಗೆ ಅಚ್ಚರಿಯಾಗಿದೆ.
ಕಣ್ಣೀರು ಹಾಕಿದ ಶೋಭಾ ಶೆಟ್ಟಿ.’
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ’ ಎಪಿಸೋಡ್ ನಲ್ಲಿ ಮಾತನಾಡಿದ ಶೋಭಾ ಶೆಟ್ಟಿ ಅವರು ಸುದೀಪ್ ಸರ್ ಮುಂದೆ ಈ ವಿಚಾರ ವ್ಯಕ್ತಪಡಿಸಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ ಅವರು, ಸದ್ಯ ಸೇಫ್ ಆಗಿದ್ದಾರೆ. ಈ ವಿಚಾರವನ್ನು ಸುದೀಪ್ ಸರ್ ತಿಳಿಸಿದ್ದಾರೆ. ಆದರೆ ಆಗ ಶೋಭಾ ಶೆಟ್ಟಿ ಹೇಳಿದ ಮಾತು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬಿಕ್ಕಿ ಬಿಕ್ಕಿ ಅಳುತ್ತಲೇ, “ಎಲ್ಲೋ ಒಂದು ಕಡೆ ನನಗೆ ಇಲ್ಲಿ ಇರೋದಕ್ಕೆ ಆಗ್ತಿಲ್ಲ ಅಂತ ಅನ್ನಿಸ್ತಾ ಇದೆ ಸರ್..” ಎಂದು ಶೋಭಾ ಶೆಟ್ಟಿ ಹೇಳಿದರು.
ಬಾಗಿಲು ತೆರೆದ ಬಿಗ್ ಬಾಸ್:
ಶೋಭಾ ಮಾತಿಗೆ ಪ್ರತಿಕ್ರಿಯಿಸಿದ ಸುದೀಪ್ ಅವರು, “ಅರ್ಥ ಮಾಡ್ಕೊಳಿ, ಯಾಕೆ ಒಳಗೆ ಹೋಗಿದ್ದೀರಿ ಅಂತ ಮರೆಯಬೇಡಿ. ನಿಮ್ಮನ್ನು ಜನ ಸೇಫ್ ಮಾಡಿದ್ದರಲ್ಲ, ಅವರಿಗೆ ನೀವು ಈ ಥರ ಉತ್ತರ ಕೋಡೋಕೆ ಆಗೋದಿಲ್ಲ. ಹೊರಗಡೆ ಹೋಗಬೇಕಾ ನೀವು? ಸರಿ ನಿಮಗಾಗಿ ಬಾಗಿಲು ತೆಗೆಸುತ್ತೇನೆ” ಎಂದು ಸುದೀಪ್ ಹೇಳಿದ್ದಾರೆ. ಆಗ ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆದಿದೆ.
ಶೋನಿಂದ ಹೊರಗೆ ಹೋದ್ರಾ ಶೋಭಾ?
“ನಾನಿಲ್ಲಿ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನ್ನಿಸ್ತಾ ಇದೆ ಸರ್. ವೀಕ್ಷಕರ ನಿರೀಕ್ಷೆಯನ್ನು ನಾನು ಮುಟ್ಟುವುದಕ್ಕೆ ಆಗೋದಿಲ್ಲ ಅಂತ ಅನ್ನಿಸ್ತಾ ಇದೆ. ಹೊರಗಡೆ ಹೋಗಿ ಹೇಗೆ ಫೇಸ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ. ಇದೆಲ್ಲವೂ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿದೆ. ಶೋಭಾ ಶೆಟ್ಟಿ ಅವರನ್ನು ಮನೆಯಿಂದ ಆಚೆ ಕಳಿಸಿದ್ರಾ? ಅಥವಾ ಸಮಾಧಾನ ಮಾಡಿ, ಮನೆಯೊಳಗೆ ಇರುವಂತೆ ಮಾಡಿದ್ರಾ ಅನ್ನೋದು ಇಂದಿನ (ಡಿ.1) ಸಂಚಿಕೆಯಲ್ಲಿ ಗೊತ್ತಾಗಲಿದೆ.
ಶೋಭಾ ಶೆಟ್ಟಿ ಕೂಡ ಕ್ವಿಟ್ ಮಾಡುವ ಮಾತುಗಳಾನ್ನಾಡಿದ್ದಾರೆ. ಒಂದು ವೇಳೆ ಅವರು ಶೋನಿಂದ ಹೊರಗೆ ಹೋದರೆ, ನಿಜವಾಗಿಯೂ ಎಲಿಮಿನೇಟ್ ಆಗಬೇಕಾದ ಸ್ಪರ್ಧಿಗೆ ಮತ್ತೊಂದು ಚಾನ್ಸ್ ಸಿಕ್ಕಂತೆ ಆಗಲಿದೆ.